ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ನಮಃ
—————
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಜೀರ್ಣೋದ್ದಾರದ
ಪುಣೆ ಸೇವಾ ಸಮಿತಿಯ ಸಮಾಲೋಚನ ಸಭೆ.
2026 ಜನವರಿ 3 ಶನಿವಾರ.
ಬೆಳಿಗ್ಗೆ ಗಂಟೆ 11.30.ಕ್ಕೆ
ಬಂಟರ ಭವನ ಬಾನೇರ್,ಪುಣೆ.
ಪಡುಬಿದ್ರಿ ಸೀಮೆಯ ಉಳ್ಳಾಯ ಎಂದೇ ಪ್ರಸಿದ್ದಿ ಪಡೆದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್ ನಿರ್ಮಾಣ, ಜೀರ್ಣೋದ್ದಾರ ಕಾರ್ಯವು ಭರದಿಂದ ನಡೆಯುತ್ತಿದ್ದು,ಆ ಪ್ರಯುಕ್ತ
ಪುಣೆ ಸೇವಾ ಸಮಿತಿಯ ಸಮಾಲೋಚನ ಸಭೆಯು,
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ.ಪ್ರಕಾಶ್ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ,ಪುಣೆ ಬಂಟರ ಸಂಘದ
ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಯವರ ಅಧ್ಯಕ್ಷತಯಲ್ಲಿ 2026 ಜನವರಿ 3,
ಶನಿವಾರದಂದು ಬೆಳಿಗ್ಗೆ ಗಂಟೆ 11.30ಕ್ಕೆ ಪುಣೆ ಬಂಟರ ಭವನ, ಬಾನೇರ್ ನಲ್ಲಿ ನಡೆಯಲಿರುವುದು. ಪುಣೆಯ ಹಿರಿಯ ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಸಭೆಯಲ್ಲಿ ಉಪಸ್ಥಿತರಿರುವರು.
ನಮ್ಮೇನ್ನೆಲ್ಲಾ ಸಲಹಿ ಪಾಲಿಸುವ ಭಗವಂತನ ಸೇವೆಯೆಂದು ಪರಿಗಣಿಸಿ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿ, ಭಗವದ್ಭಕ್ತರಾದ ತಾವೆಲ್ಲರೂ ಸಭೆಯಲ್ಲಿ ಪಾಲ್ಗೊಂಡು, ಸಾನಿಧ್ಯ ದೇವರಾದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಕೃಪೆಗೆ ಪಾತ್ರ ರಾಗಬೇಕೆಂದು ವಿನಂತಿಸುವ..
—————
ಪುಣೆ ಸೇವಾ ಸಮಿತಿ.







































